ಅಂತರ್ಜಾಲದ ಆರಂಭದ ಮೆಟ್ಟಿಲು
ಹತ್ತನೇ ಶತಮಾನದ ಅವಧಿಯಲ್ಲಿ ರಾಜಾಶ್ರಯದಲ್ಲಿ ಪಂಪ, ರನ್ನ, ಪೊನ್ನ, ಜನ್ನರು ಹಳೆಗನ್ನಡದ ವೈಭವ, ಶ್ರೀಮಂತಿಕೆ, ಆಪ್ಯಾಯತೆಗಳನ್ನು ಇನ್ನಿಲ್ಲದಂತೆ ಮೆರೆದದ್ದು ಸರ್ವವೇದ್ಯ. ಸಾಹಿತ್ಯದ ಸೊಗಡು ಅದೇ ಮಟ್ಟದಲ್ಲಿ ಇನ್ನೋರ್ವ ಕವಿಯ ಕೈಚಳಕಕ್ಕೆ ಸಾಕ್ಷಿಯಾಗಿ ಮತ್ತೊಮ್ಮೆ ಪ್ರಕಟವಾಗುವುದೋ ಇಲ್ಲವೋ ಎಂಬ ಅನುಮಾನವಿತ್ತು ಹತ್ತು ಶತಮಾನಗಳ ಕಾಲ, ಅಲ್ಲೊಂದು ಇಲ್ಲೊಂದು ಪ್ರತಿಭೆಯ ಮಿಂಚು ಫಲಫಳಿಸುತ್ತಿದ್ದಾಗ್ಯೂ.
![]() |
ರಕ್ಷಾಪುಟ (ಮುಂಬದಿ) |
ಅಂಥ ಹಿನ್ನೆಲೆಯಲ್ಲಿ ಇಪ್ಪತ್ತನೇ ಶತಮಾನದ ಅದ್ಭುತ, ಕಬ್ಬಿಗರ ಹಬ್ಬಕ್ಕೊಂದು ಹೊಸ ಸೊಬಗು, ಇದೋ ಪ್ರಕಟವಾಗುತ್ತಿದೆ. ಅಜ್ಞಾತ ನೆಲೆಯಿಂದ ಅಗೆದು ತೆಗೆದ ಅತ್ಯಪೂರ್ವ ಕಾವ್ಯರತ್ನ 'ಬಿದಿ ಪುದಿದ ಗದೆ ಕದನಂ'.



Comments
Post a Comment